Wednesday, September 25, 2024
spot_img

ನಟ ಪ್ರಕಾಶ್ ರಾಜ್ ನುಡಿ

ಸಾತ್ವಿಕ ನುಡಿ ಶಿವಮೊಗ್ಗ
ಇಂದಿನ ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ್ ರಾಜ್ ಮಾತನಾಡಿ ನಾನೀಗ ನಟನಾಗಿ ಬೆಳದಾಗಿದೆ

ನಟನಾಗಿ ರಂಗ ಭೂಮಿಗೆ ಬಂದು ನಟಿಸುವುದು ದೊಡ್ಡದಲ್ಲ. ರಂಗಭೂಮಿಯಲ್ಲಿ ಕಲಾವಿದರಗಲೂ ಮಕ್ಕಳು ಹಾಗೂ ಯುವ ನಟರಾಗಲು ನಿರ್ದಿಗಂತ ರಂಗ ಭೂಮಿಯ ಪ್ರಯಾಣ ದೇಶದಲ್ಲಿ ಡಿಪ್ಲೊಮಾ ನಡೆಯುತ್ತಿದೆ. ಡಿಪ್ಲೋಮಾದ ನತರ ಏನು ಎಂಬುದಕ್ಕೆ ನಿರ್ದಿಗಂತ ಉತ್ತರ ನೀಡಲಿದೆ ಎಂದು ನಟ ಪ್ರಕಾಶ್ ರಾಜ್ ತಿಳಿಸಿದರು.

ನಿರ್ದಿಗಂತ ಫಿಲೋಸಫಿ ಬಸವಣ್ಣನವರ ಆಲೋಚನೆಯಂತೆ ನಾವೆಲ್ಲರೂ ಒಂದು ಎಲ್ಲರ ಮೈಯಲ್ಲಿ ಹರಿಯುವ ರಕ್ತವು ಒಂದು ಎಲ್ಲರಲ್ಲೂ ಪ್ರತಿಭೆಗಳು ಇರಬೇಕು ಪ್ರೀತಿ ಎಂದರೇನು, ಈಗಿನ ಸಮಯದಲ್ಲಿ ಭಿನ್ನಾಭಿಪ್ರಾಯವನ್ನ ಸಂಭ್ರಮಿಸುತ್ತಾ ಒಂದಾಗುವುದು. ನಿರ್ದಿಗಂತ ಗಾಯಗಳು ಎಂದು ನಾಟಕವಾಗಿತ್ತು, ಆಯಾ ಕಾಲದಲ್ಲಿ ಬರೇದ ಪುಸ್ತಕಗಳಲ್ಲಿ ಬರೆದ ಯುದ್ಧ, ಕೋಮುಗಲಭೆಗಳ ಸೈಡ್ ಎಫೆಕ್ಟ್ ಗಳಾಗಿವೆ.

ನಿರ್ದಿಗಂತದ ಪ್ರಯಾಣ ಶಿವಮೊಗ್ಗಕ್ಕೆ ಬಂದಿದೆ. ಮುಂದೆ ಭದ್ರಾವತಿ ನಗರಕ್ಕೆ ಹೋಗಲಿದ್ದೇವೆ ಧರ್ಮದ ವಿರುದ್ಧವಲ್ಲ. ನಮಗೆ ಬೇಕಿರುವುದು ಸಂವಾದ ಜಗಳವಲ್ಲ. ಪಠ್ಯ ಪುಸ್ತಕ ಬದಲಾವಣೆ ನಿರಂತರವಾಗಿದೆ. ನಮ್ಮ ಮಕ್ಕಳ ಭವಿಷ್ಯಕ್ಕೆ ಪೋಷಕರು ಎಚ್ಚೆತ್ತುಕೊಳ್ಳಬೇಕು ಎಂದರು.

ಹೋಮ ಹವನ ವಿರೋಧಿಸುವುದಿಲ್ಲ. ವಿರೋಧಿಸಿವೆ ಎಂದು ಎಲ್ಲೂ ಹೇಳಿಲ್ಲ ಆದರೆ ರಾಜಕಾರಣಿ ನಮ್ಮ ತೆರಿಗೆಯಲ್ಲಿ ಧರ್ಮದ ವಿಚಾರ ಮಾತನಢುವುದಲ್ಲ. ಶಿಕ್ಷಣ, ಆಸ್ಪತ್ರೆ, ಸರಿಪಡಿಸುವೆ ಎಂದು ಮತ ಪಡೆದು‌ಬಂದ ರಾಜಕಾರಣಿ ಸರಿಪಡಿಸಬೇಕು.ಧರ್ಮವಮ್ನ ನಿಯಂತ್ರಿಸುವುದಲ್ಲ. ನನ್ನ ಪತ್ನಿ ಮತ್ತು ಮಗಳ ಇಚ್ಛೆಯಂತೆ ಹೋಮ ಹವನ ಮಾಡಿಸಲು ಮುಂದಾದಾಗ ಬೆಂಬಲಿಸಿ ಹೋಗಿದ್ದೆ ಹಾಗೂ ಹವನದಲ್ಲೂ ಕೂತಿದ್ದೆ ಎಂದು ಸ್ಪಷ್ಟಪಡಿಸಿದರು.

ಪ್ರಧಾನಿ ಗ್ಯಾರೆಂಟಿಯಿಂದ ದೇಶ ದಿವಾಳಿಯಾಗುತ್ತದೆ ಎಂಬ ಹೇಳಿಕೆ ರಾಜಕಾರಣದ ಹೇಳಿಕೆ. ರಾಜಕಾರಣಿಯಾಗಿ ದಿವಾಳಿ ಆಗಿದೆ ಎಂಬುದು ರಾಜಕಾರಣ ಹೇಳಿಕೆಯಾಗುತ್ತದೆ. ಆದರೆ ಸಾರ್ವಜನಿಕರಿಗೆ ಒಳ್ಳೆಯದಾಗಿದೆ. ಉಚಿತ ಯೋಜನೆಗೆ ನನ್ನ ಬೆಂಬಲವಿದೆ. ಸರಿಯಾದ ಮಾರ್ಗದಲ್ಲಿ ಗ್ಯಾರೆಂಟಿ ಜನಸಾಮಾನ್ಯರಿಗೆ ತಲುಪದಿದ್ದಾಗ ಪತ್ರಿಕೆಗಳು ಹಾಗೂ ನಾವು ಪ್ರಶ್ನಿಸುವಂತಾಗಬೇಕು ಹಾಗೂ ಪ್ರಶ್ನಿಸಬೇಕು ಹೌದಲ್ಲವೇ ಎಂದರು.

Related Articles

Stay Connected

0FansLike
3,912FollowersFollow
0SubscribersSubscribe

Latest Articles