ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣೆಯ ಮಹಿಷಿ ಉತ್ತರಾಧಿ ಮಠದಲ್ಲಿ ದರೋಡೆ ನಡೆಸಲು ಆರೋಪಿಗಳ ಸ್ಕೆಚ್
ಅಭೀ ಶ್ರೀನಿವಾಸ ಮೂರನಾಲ್ಕು ವೆಹಿಕಲ್ ನಲ್ಲಿ ಹೋಗಿ ಮಠವನ್ನು ಭಕ್ತಾದಿಗಳ ರೂಪದಲ್ಲಿ ಹೋಗಿ ಮಠ ನೋಡಿ ಸ್ಕೆಚ್ ರೆಡಿ ಮಾಡ್ದಾ
ಮಠದಲ್ಲಿ ಹಣ 300 ಕೋಟಿ ಹಣವಿದೆ ಎಂಬ ಬ್ರಮೆಯಿಂದ ಸಂಚು ರೂಪಿಸುತ್ತಾರೆ. ಶ್ರೀನಿವಾಸ್ ಮತ್ತು ರಿಪ್ಪನ್ ಪೇಟೆ ಪೃಥ್ವಿರಾಜ್ 300 ಕೋಟಿ ಹಣ ಹೊಡೆದು ಸೆಟ್ಲು ಆಗಲು ಪ್ಲಾನ್ ಮಾಡುತ್ತಾರೆ. ಇವರ ಸ್ನೇಹಿತ ಅಭಿಯನ್ನ ಸೇರಿ ಪ್ಲಾನ್ಗಳನ್ನ ಮಾಡುತ್ತಾರೆ.
ಕೆಲವರು ಮಠದಲ್ಲಿ ಸುಮಾರು 300 ಕೋಟಿ ಹಣವಿದೆ ಎಂದು ಹಬ್ಬಿಸಿದ್ದರು ಇದು ರಾಬರಿ ಮಾಡಿ ವೆಲ್ ಸೆಟಲ್ ಅಗುವ ತವಕದಿಂದ ದಿನಾಂಕ: 05/04/2025ರಂದು ರಾತ್ರಿ 09-45 ಗಂಟೆ ಸಮಯದಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು, ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಷಿ ಗ್ರಾಮದ ಉತ್ತರಾದಿ ಮಠದಲ್ಲಿ ಸುಮಾರು 12 ರಿಂದ 15 ಜನರ ತಂಡ ಬಂದು ಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕುಮಾರ ಆಚಾರ್ಯ ಮತ್ತು ಮಠದಲ್ಲಿದ್ದರವರಿಗೆ ಹೆದರಿಸಿ, ಹಲ್ಲೆ ಮಾಡಿ ಮಠದಲ್ಲಿದ್ದ 50000/-ರೂ ನಗದು ಹಣವನ್ನು ಮತ್ತು ಮಠದಲ್ಲಿ ಅಳವಡಿಸಿದ್ದ ಸಿಸಿ ಟಿವಿಯ ಡಿವಿಆರ್, ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದರು.
ಅದರೆ ಇವರು ಹಾಕಿದ ಸ್ಕೆಚ್ 300 ಕೋಟಿ ಅದರೆ ಮಠದಲ್ಲಿ ಸ್ಕಿದ್ದು ಕೇವಲ 50 ಸಾವಿರ ಹಣ ಅದರೆ ಬಂಗಾರ ಮುಟ್ಟದ ರಾಬರ್ಸ ಎಕೇಂದರೆ ದೇವರಮೇಲೆ ಇರುವ ಬಯದಿಂದ್ ಅಂತೆ .. !
ಮಾಸ್ಟರ್ ಮೈಂಡ್ ಶ್ರೀನಿವಾಸ.?
ಸುರೇಶ್ ಅಲಿಯಸ್ ಸತೀಶ್ ಮಠದಲ್ಲಿ 300ಕೋಟಿ ಹಣವಿದೆ ಎಂದು ಎಲ್ಲಾ ಸಂಗಡಿಗರಿಗೆ ತಲೆ ಕೆಡಿಸಿ ಅಂದರ್ ಮಾಡಿದನಾ?
1) ಸುರೇಶ @ ನೇರಲೆ ಸುರೇಶ, 2) ಸತೀಶ @ ಸತ್ಯನಾರಾಯಣ, 3) ಪೃಥ್ವಿರಾಜ್, 4) ಸಿರಿ @ ಶ್ರೀಕಾಂತ, 5) ಅಭಿಲಾಷೆ @ ಅಭಿ, 6) ರಾಕೇಶ, 7) ಭರತ @ ಚಿಟ್ಟಿ, 8) ಪವನೆ ಗಿಡ್ಡ ಪವನ್, 9) ರಮೇಶ್ @ ನವೀನ್, 10) ನವೀನ್ ಕುಮಾರ್
@ ಡೈಮಂಡ್ ನವೀನ್. 11) ದರ್ಶನ್, 12) ಕರಿಬಸಪ್ಪ ಆರ್ ರವರನ್ನು ದಸ್ತಗಿರಿ ಮಾಡಿದ್ದು.
ಮೇಲ್ಕಂಡ ಆರೋಪಿತರನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಬಳಸಿದ ಈ ಕೆಳಕಂಡ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ.
1) ಕೆಎ-51-ಎಬಿ-5604 ನೊಂದಣಿ ಸಂಖ್ಯೆಯ ಟಿಟಿ ವಾಹನ, ಅಂದಾಜು ಮೌಲ್ಯ 10 ಲಕ್ಷ ರೂಪಾಯಿ.
2) ಕೆಎ-01-ಎಂಜಿ-2700 ನೊಂದಣಿ ಸಂಖ್ಯೆಯ ಮಹೀಂದ್ರ ಸ್ಕಾರ್ಪಿಯೋ ಕಾರು, ಅಂದಾಜು ಮೌಲ್ಯ 04 ಲಕ್ಷ ರೂಪಾಯಿ.
3) ಕೃತ್ಯಕ್ಕೆ ಬಳಸಿದ ಆಯುಧ ಮತ್ತು ಇನ್ನಿತರ ವಸ್ತುಗಳನ್ನು ವಶ ಪಡಿಸಿಕೊಳ್ಳಬೇಕಾಗಿದೆ ಎಂದು ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಎಸ್ಪಿ ಮಿಥುನ್ ಕುಮಾರ್ ಅವರು ವಿವರಿಸಿದ್ದಾರೆ.