Wednesday, September 25, 2024
spot_img

ಜನ ನನ್ನನ್ನು ಸ್ವೀಕರಿಸಿ ಗೆಲ್ಲಿಸುವ ಭರವಸೆಯಿಂದ: ಹೆಚ್.ಸಿ. ಯೋಗೀಶ್ ವಿಶ್ವಾಸ

ಶಿವಮೊಗ್ಗ: ಶಿವಮೊಗ್ಗದ ಜನತೆ ನನ್ನನ್ನು ಈ ಬಾರಿ ಗೆಲ್ಲಿಸುತ್ತಾರೆ ಎಂದು ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಯೋಗೀಶ್ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಇಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಮೀಡಿಯಾ ಹೌಸ್ ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪಾಲಿಕೆ ಸದಸ್ಯನಾಗಿ ಹಾಗೂ ಕಾಂಗ್ರೆಸ್ ನ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವದ ಆಧಾರವನ್ನಾಗಿಟ್ಟುಕೊಂಡು ಹೈಕಮಾಂಡ್ ನನಗೆ ಟಿಕೆಟ್ ನೀಡಿದೆ. ಜನತೆ ಈ ಬಾರಿ ನನ್ನನ್ನು ಗೆದ್ದೇ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ರಾಜಕಾರಣ ಕುಟುಂಬದಿಂದ ಬಂದವನು ನಾನು. ಮಹಾನಗರ ಪಾಲಿಕೆ ಸದಸ್ಯನಾಗಿ ರಾಜಕಾರಣಕ್ಕೆ ಪ್ರವೇಶ ಪಡೆದೆ. ಮೂರು ಬಾರಿ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ನನ್ನ ಅಧಿಕಾರದ ಅವಧಿಯಲ್ಲಿ ಬಹಳಷ್ಟು ಕೆಲಸ ಮಾಡಿದ್ದೇನೆ. ಪೌರ ಕಾರ್ಮಿಕರ ಪರ ಹೋರಾಟ. ಬಸವೇಶ್ವರ ಪುತ್ಥಳಿ, 108 ಅಡಿ ಎತ್ತರದ ಧ್ವಜ, ಪಾರ್ಕ್‍ಗಳ ಅಭಿವೃದ್ಧಿ, ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ, ಕ್ರೀಡೆ, ಸಾಂಸ್ಕøತಿಕ ಕ್ಷೇತ್ರಕ್ಕೆ ಕೊಡುಗೆ, ದಸರಾ ಹಬ್ಬಕ್ಕೆ ವಿಶೇಷ ಮೆರಗು ನೀಡಿದ್ದು ಇವೆಲ್ಲವನ್ನು ಜನ ಗುರುತಿಸಿದ್ದಾರೆ ಎಂದರು.
ಪಾಲಿಕೆ ಸದಸ್ಯನಾಗಿ, ವಿರೋಧ ಪಕ್ಷದ ನಾಯಕನಾಗಿ ಅನೇಕ ಹೋರಾಟಗಳನ್ನು ನಡೆಸುತ್ತಾ ಬಂದಿದ್ದೇನೆ. ಮುಖ್ಯವಾಗಿ ಬ್ಯಾರೀಸ್ ಸಿಟಿ ಸೆಂಟರ್ ಮಾಲ್, ಲಕ್ಷ ವೃಕ್ಷ ಆಂದೋಲನದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಹೋರಾಟ, ಪ್ರತಿಭಟನೆ ನಡೆಸುತ್ತಾ ಬಂದಿದ್ದೇನೆ. ಅದಿನ್ನೂ ತಾತ್ವಿಕ ಅಂತ್ಯ ಕಾಣಬೇಕಾಗಿದೆ. ಯಾವುದೇ ರೀತಿಯ ಅನ್ಯಾಯವಾದರೂ ನನ್ನ ಹೋರಾಟ ಪಾಲಿಕೆಯ ಒಳಗೂ ಮತ್ತು ಹೊರಗೂ ಕಾಂಗ್ರೆಸ್ ಸದಸ್ಯರೊಂದಿಗೆ ಸೇರಿಕೊಂಡು ಮಾಡಿದ್ದೇನೆ ಎಂದರು.
ವೀರಶೈವ ಸಮಾಜದಿಂದಲೂ ನಾನು ಗುರುತಿಸಿಕೊಂಡಿದ್ದೇನೆ. ಲಂಡನ್ ನಿಂದ ಬಸವೇಶ್ವರ ಪುತ್ಥಳಿ ತರಲು ಶ್ರಮಿಸಿದ್ದೇನೆ. ಇವೆಲ್ಲವೂ ನನಗೆ ಪ್ಲಸ್ ಪಾಯಿಂಟ್ ಆಗಲಿವೆ. ಜೊತೆಗೆ ಎನ್.ಎಸ್.ಯು.ಐ., ಯುವ ಕಾಂಗ್ರೆಸ್ ಘಟಕಗಳಲ್ಲಿ ಕೆಲಸ ಮಾಡಿದ್ದೇನೆ. ಆಡಳಿತದ ಅನುಭವವೂ ನನಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಪಕ್ಷ ಹೇಳಿದ ಕೆಲಸವನ್ನು ಚಾಚೂ ತಪ್ಪದೇ ಮಾಡಿದ್ದೇನೆ. ಕೊರೋನಾ ಸಂದರ್ಭದಲ್ಲಿ ಹೆಚ್ಚು ಕೆಲಸ ಮಾಡಿದ್ದೇನೆ. ಯುವಕರು ನನ್ನೊಂದಿಗಿದ್ದಾರೆ ಎಂದರು.
ನನ್ನೊಡನೆ ಅಭ್ಯರ್ಥಿ ಆಕಾಂಕ್ಷಿಗಳಾಗಿ 11 ಜನರು ಅರ್ಜಿ ಹಾಕಿದ್ದರು. ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಬಿಟ್ಟು ಉಳಿದ ಎಲ್ಲರೂ ಈಗ ನನ್ನೊಡನೆ ಇದ್ದಾರೆ. ಮತ ಪ್ರಚಾರವನ್ನು ಕೂಡ ಆರಂಭ ಮಾಡಿದ್ದೇವೆ. ಆಯನೂರು ಮಂಜುನಾಥ್ ಹಾಗೂ ಕೆ.ಬಿ. ಪ್ರಸನ್ನಕುಮಾರ್ ಜೆಡಿಎಸ್ ಗೆ ಬಂದಿದ್ದರಿಂದ ಯಾವ ಪರಿಣಾಮ ಬೀರುವುದಿಲ್ಲ. ಹಾಗೆಯೇ ಎಂ. ಶ್ರೀಕಾಂತ್ ಜೆಡಿಎಸ್ ಕಟ್ಟಿ ಬೆಳೆಸಿದವರು. ಅವರು ಸ್ಪರ್ಧಿಸಿದ್ದಾಗ ಎಷ್ಟು ಮತಗಳು ಬಂದಿದ್ದವೆಂದು ಜನರಿಗೆ ಗೊತ್ತಿದೆ. ಗೆಲ್ಲವು ಅಭ್ಯರ್ಥಿಗೆ ಜನ ಮತ ಹಾಕುತ್ತಾರೆಯೇ ಹೊರತೂ ಕೇವಲ ಅಭಿಮಾನದಿಂದ ಅಲ್ಲ ಎಂದರು.

Related Articles

Stay Connected

0FansLike
3,912FollowersFollow
0SubscribersSubscribe

Latest Articles