- ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಯವರು 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶಿವಮೊಗ್ಗದ ಬಸವಕೇಂದ್ರದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಚಂದ್ರಪ್ಪ ಮೋಹನ್ ಬಸವರಾಜಪ್ಪ ವೈಜಿನಾಥ ಬಸವಾರಾಜ್ ಕೋಡದ್ ರುದ್ರೆಶ್ ಕೋಡದ್ ಸತೀಶ್ ಮುಂಚೆಮನೆ ಲೋಕೆಶ್ವರಪ್ಪ, ಸಜ್ಜನ್ ಶೆಟ್ಟರ್, ಹೆಮಂತ್ ಕಮಾರ್, ಮಂಜುನಾಥ, ಶಿವಯೋಗಿ ಹಂಚಿನಮನೆ, ಹಾಲಸ್ವಾಮಿ, ಚಿದಾನಂದ್, ಕೆ.ಜಿ.ವೆಂಕಟೇಶ,ಹಲವು ಭಕ್ತರು ಮತ್ತು ಸಮುದಾಯದ ಮುಖಂಡರು ಭಾಗವಹಿಸಿದ್ದರು.
- ಕಾರ್ಯಕ್ರಮ ನಂತರ ಬಸವ ನೆಲೆಯಲ್ಲಿ ತಿಂಡಿ ಮುಗಿಸಿದ ನಂತರ ಸ್ವಾಮೀಜಿಯವರ ನೇತೃತ್ವದಲ್ಲಿ “ಭೂದೇವಿಗೆ ಹಸಿರು ಬಾಗಿನ” ಎಂಬ ಅಭಿಯಾನವನ್ನು ರೂಪಿಸಲಾಯಿತು, ಇದರಡಿಯಲ್ಲಿ ಗಿಡಗಳನ್ನು ನೆಡುವ ಕಾರ್ಯ ಕೈಗೊಳ್ಳಲಾಯಿತು
-
ಈ ಕಾರ್ಯಕ್ರಮದಲ್ಲಿ ಡಾ. ಮರುಳಸಿದ್ದ ಸ್ವಾಮೀಜಿಯವರು ಭಕ್ತರು ಹಾಗೂ ನೆರೆದ ಎಲ್ಲರೊಂದಿಗೆ ಶಿಮುಲ್ ಪಕ್ಕದ ಜಮೀನಿಗೆ ತೆರಳಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿದರು. ಈ ಸತ್ಕಾರ್ಯದಲ್ಲಿ ಎಸ್ ರುದ್ರೇಗೌಡರು, ಡಾ. ಧನಂಜಯ ಸರ್ಜಿ, ಜಿ ಬೆನಕಪ್ಪ, ಎಚ್ ಡಿ ನಾಗರಾಜ್ ಅನಿತಾ ರವಿಶಂಕರ್
ಈ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲು ಸ್ಥಳೀಯರು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.ಈ ರೀತಿಯ ಚಟುವಟಿಕೆಗಳು ಪ್ರಕೃತಿ ಪ್ರೇಮವನ್ನು ಉತ್ತೇಜಿಸಲು ಮತ್ತು ಪರಿಸರವನ್ನು ಉಳಿಸುವ ಮಹತ್ವವನ್ನು ಎಲ್ಲರಿಗೂ ಸಾರಲು ಮುಖ್ಯವಾಗಿವೆ ಎಂದು ಸ್ವಾಮೀಜಿಯವರು ಹೇಳಿದರು.