ಇಂದು ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರು ಶಿವಮೊಗ್ಗ ಜಿಲ್ಲಾಧಿಕಾರಿ ಮುಖೇನ ಮಾನ್ಯ ಪ್ರಧಾನ ಮಂತ್ರಿಗಳು ಭಾರತ ಸರ್ಕಾರ ಭಾರತ ಇವರಿಗೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದರು.
ಬಾಂಗ್ಲಾದೇಶದ ಅಮಾಯಕ ಹಿಂದುಗಳ ಮೇಲೆ ಕೊಲೆ ಅತ್ಯಾಚಾರ ಹಾಗೂ ಮಂದಿರಗಳನ್ನು ಹಾಳು ಮಾಡುವುದನ್ನು ತಡೆಯಬೇಕು
ಬಾಂಗ್ಲಾದೇಶದ ಆರಕ್ಷಣೆ ಹಾಳಾಗಿ ನಮ್ಮ ಹಿಂದೂಗಳ ಮೇಲೆ ಕೊಲೆ ಅತ್ಯಾಚಾರ ಹಿಂಸೆಯನ್ನು ನೀಡಿತಿರುವ ಬಗ್ಗೆ ಅತೀವ ಮನೋನಂದಿದ್ದು, ಇದು ನಮ್ಮ ಹಿಂದುಗಳ ಅವಸ್ಥೆಯನ್ನು ಸಹಿಸಲು ಅಸಾಧ್ಯವಾಗಿದೆ. ಬಾಂಗ್ಲಾದೇಶ ಒಂದು ಜಾತ್ಯಾತೀತ ರಾಷ್ಟ್ರವಿದ್ದು ಕಟ್ಟರ್ ಮುಸ್ಲಿಮರು ಈ ರೀತಿ ಹಿಂದುಗಳ ಮೇಲೆ ದೌರ್ಜನ್ಯವೆಸ್ಸಗಿರುವುದು ಅಕ್ಷಮ್ಯ ಅಪರಾಧ. ಕೂಡಲೇ ತಾವು ಇದರ ಬಗ್ಗೆ ಕ್ರಮಜರುಗಿಸಿ ನಮ್ಮ ಹಿಂದುಗಳು ದೌರ್ಜನ್ಯಕ್ಕೆ ಒಳಗಾದವರನ್ನು ರಕ್ಷಣೆ ಮಾಡಿ CAA ಕಾನೂನಿನ ಅಡಿಯಲ್ಲಿ ಭಾರತಕ್ಕೆ ಕರೆ ತರಬೇಕಾಗಿ ವಿನಂತಿ. ಇದರೊಂದಿಗೆ NRCಯನ್ನ ಕೂಡಾ ಲಾಗು ಮಾಡಿ ಭಾರತವನ್ನು ನುಸುಳುಕೋರರಿಂದ ರಕ್ಷಣೆ ಮಾಡಬೇಕಾಗಿ ವಿನಂತಿ.ತಾವು ಕೂಡಲೇ ಇದರ ಬಗ್ಗೆ ಅತೀವ ಕಾಳಜಿ ವಹಿಸಬೆಕಾಗಿ ವಿಶ್ವ ಹಿಂದೂ ಪರಿಷದ್ ಶಿವಮೊಗ್ಗ ಆಗ್ರಹಿಸುತ್ತದೆ ಎಂದ್ದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರಾದ ವಾಸುದೇವ್ ಅವರು ಜಿಲ್ಲಾಧಿಕಾರಿಗೆ ಹಲವು ಕಾರ್ಯಕರ್ತರೊಂದಿಗೆ ಮನವಿ ಸಲ್ಲಿಸಿದರು ಈ ಸಮಯದಲ್ಲಿ ವಡಿವೇಲ್ ವಿನೋದ್ ಕುಮಾರ್ ಜೈನ್ ನಾರಾಯಣ್ ವರಣೆಕರ್ ಜಿತೇಂದ್ರ ಗೌಡ ನಾಗರಾಜ್ ಆನಂದ್ ರಾವ್ ಇನ್ನು ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.