ಶಿವಮೊಗ್ಗ ನಗರ ಉತ್ತರ ಬ್ಲಾಕ್ 20ನೇ ವಾರ್ಡಿನ (ಹೋಸಮನೆ) ಅಧ್ಯಕ್ಷರನ್ನಾಗಿ ಯುವ ನಾಯಕ ರಾಜೇಶ ಟಿ.ಎಸ್. ಬಿನ್ ತಿಮ್ಮಪ್ಪ ಅವರನ್ನು ನೇಮಿಸಲಾಗಿದೆ.
ಈ ಹಿಂದೆ ವಾರ್ಡಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಸ್ಟೇಲ್ಲಾ ಮಾರ್ಟಿನ್ ಅವರನ್ನು ಉತ್ತರ ಬ್ಲಾಕ್ ಕಾಂಗ್ರೇಸ್ರ್ ಕಾರ್ಯದರ್ಶಿಯಾದ ಕಾರಣದಿಂದ ವಾರ್ಡ್ ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಲಾಗಿದೆ.
ಶ್ರೀ ರಾಜೇಶ್ ಟಿ.ಎಸ್. ಬಿನ್ ತಿಮ್ಮಪ್ಪ ಅವರು ತಮ್ಮ ಹೊಸ ಹೊಣೆಗಾರಿಕೆಯನ್ನು ತಕ್ಷಣ ವಹಿಸಿಕೊಂಡು, ಶಿವಮೊಗ್ಗ ನಗರ ಕಾಂಗ್ರೇಸ್ ಸಮಿತಿಯ ಮಾರ್ಗದರ್ಶನದಲ್ಲಿ ಮತ್ತು ಸ್ಥಳೀಯ ನಾಯಕರ ಸಹಯೋಗದಲ್ಲಿ ಪಕ್ಷ ಸಂಘಟನೆ ಮತ್ತು ಬಲವರ್ಧನೆಗೆ ಕಾರ್ಯೋನ್ಮುಕರಾಗಬೇಕೆಂದು ಸೂಚಿಸಲಾಗಿದೆ.
ಹೊಸ ಅಧ್ಯಕ್ಷರಾಗಿ ಅವರು ತಮ್ಮ ನಾಯಕತ್ವದಲ್ಲಿ 20ನೇ ವಾರ್ಡಿನ ಅಭಿವೃದ್ಧಿಗೆ ಹಾಗೂ ಕಾಂಗ್ರೇಸ್ ಪಕ್ಷದ ಬಲವರ್ಧನೆಗೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿರೀಕ್ಷೆಯಿದೆ.
ಶಿವಮೊಗ್ಗ ನಗರವು ಕರ್ನಾಟಕದ ಪ್ರಮುಖ ನಗರಗಳಲ್ಲಿ ಒಂದಾಗಿ, ಇಂದಿಗೂ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಜೀವನದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಇಲ್ಲಿ ಕಾಂಗ್ರೆಸ್ ಪಕ್ಷವು ಸಕ್ರಿಯವಾಗಿ ಪಾಲ್ಗೊಂಡು, ಜನತೆ ಜೊತೆ ಹತ್ತಿರದ ಸಂಪರ್ಕವನ್ನು ಹೊಂದಲು ನಿರಂತರ ಪ್ರಯತ್ನಿಸುತ್ತಿದೆ. ರಾಜೇಶ್ ಟಿ.ಎಸ್. ಅವರ ನೇಮಕದಿಂದ ಪಕ್ಷಕ್ಕೆ ಹೊಸ ಶಕ್ತಿಯನ್ನು ತುಂಬುತ್ತದೆ ಎಂದು ಪಕ್ಷದ ಹಿರಿಯ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.