Wednesday, September 25, 2024
spot_img

ಅಕ್ಕನ ನೆನಪಿಗಾಗಿ ಗೌರಿ  ಸಿನಿಮಾ ಇಂದ್ರಜಿತ್ ಲಂಕೇಶ್..!?

ಅಕ್ಕನ ನೆನಪಿಗಾಗಿ ಗೌರಿ  ಸಿನಿಮಾ ಇಂದ್ರಜಿತ್ ಲಂಕೇಶ್ ..!?

ಪಿ ಲಂಕೇಶ್ ಅವರ ಮೊಮ್ಮಗ ಇಂದ್ರಜಿತ್ ಲಂಕೇಶ್ ರ ಮಗ ಸಮರ್ಜಿತ್ ಲಂಕೇಶ್ ಅಭಿನಯದ ಗೌರಿ ಚಲನ ಚಿತ್ರದ ಪ್ರಮೋಷನ್ ಗಾಗಿ ಚಿತ್ರದ ನಟ ಇಂದ್ರಜಿತ್ ಲಂಕೇಶ್ ನಾಯಕ ನಟಿ ಸಾನಿಯಾ ಅಯ್ಯರ್ ಶಿವಮೊಗ್ಗಕ್ಕೆ ಆಗಮಿಸಿದ್ದರು.

ಈ ಸಮಯದಲ್ಲಿ ನಮ್ಮರು  ಹುಡುಗ ಸಮರ್ಜಿತ್ ಲಂಕೇಶ್ ಅದ್ದರಿಂದ ನಮ್ಮ ಪತ್ರಿಕೆಯ ಬೇಟಿಮಾಡುವ ಸಮಯದಲ್ಲಿ  ಪಿ ಲಂಕೇಶ್ ಮೊಮ್ಮಗ
ಕೊನಗವಳ್ಳಿಯ ಕೆ.ಪಿ.ಮಂಜುನಾಥ್ ಅವರು ಸಾತ್ ನೀಡಿದರು  ನಾವು ಗೌರಿ ಚಲನ ಚಿತ್ರಕ್ಕೆ ಶುಭಹಾರೈಸಿದೆವು, ಇಂದ್ರಜಿತ್ ಲಂಕೇಶ್ ರವರು ನಮ್ಮ ಪತ್ರಿಕೆ ಸಾತ್ವಿಕ ನುಡಿ ಮಾಸಪತ್ರಿಕೆ ಶುಭ ಹಾರೈಸುತ್ತಾ ನಮ್ಮ ತಂದೆಯ ಲಂಕೇಶ್ ಪತ್ರಿಕೆ ನಂತರ ನೀವು ನಿಮ್ಮ ಪತ್ರಿಕೆಯನ್ನು ನಮ್ಮ ಹಳ್ಳಿಯಲ್ಲಿ ಚಾಲನೆ ನೀಡಿರುವುದು ಸಂತೋಷಕರದ ಸಂಗತಿ ನಿಮ್ಮ ಪತ್ರಿಕೆ ರಾಜ್ಯಾದ್ಯಂತ ರೈತರ ಬಡವರ ಶೋಷಿತರ ಪರವಾಗಿ ಕಾರ್ಯನಿರ್ವಹಿಸುವಂತಗಲಿ  ಎಂದು ನುಡಿ ಮಾತುಗಳನ್ನು ತಿಳಿಸಿದರು.

ಸಮರ್ಜಿತ್ ಲಂಕೇಶ್ ಅಭಿನಯದ ಗೌರಿ ಚಲನ ಚಿತ್ರದ ಪ್ರಮೋಷನ್ ಗಾಗಿ ಚಿತ್ರದ ನಟ ಇಂದ್ರಜಿತ್ ಲಂಕೇಶ್ ನಾಯಕ ನಟಿ ಸಾನಿಯಾ ಅಯ್ಯರ್ ಸಮ್ಮುಖದಲ್ಲಿ ಸುದ್ದಿಗೋಷ್ಠಿ ನಡೆಸಿದ ಇಂದ್ರಜಿತ್ ಲಂಕೇಶ್  ರವರು ಗೌರಿ ದೊಡ್ಡ ಬಜೆಟ್ ಚಲನಚಿತ್ರ  ನಿರ್ಮಿಸಿ.
ಬಿಡುಗಡೆ ಹಂತಕ್ಕೆ ಬಂದಿದೆ.  ಅದ್ದೂರಿಯಾಗಿ ಐದು ಜನ ಸಂಗೀತ ನಿರ್ಧೇಶಕರಿದ್ದಾರೆ, ಮಾಥ್ಯು. ಕೆ ಕಲ್ಯಾಣ್, ಸೇರಿದಂತೆ ಐದ ಜನ ಸಂಗೀತ ನಿರ್ದೇಶಕರಿದ್ದಾರೆ.

ಸಾನಿಯಾ ಅಯ್ಯರ್ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಚಿತ್ರದ ನಾಯಕ ನಟ ಸಮರ್ಜಿತ್ ಲಂಕೇಶ್ ಥಿಯೇಟರ್ ಸ್ಟಡಿಸ್ ಮಾಡಿದ್ದಾರೆ. ಇಬ್ಬರು ಕನ್ನಡ ಪ್ರತಿಭೆಗಳಿದ್ದಾರೆ. ಪ್ರಿಯಾಂಕ ಉಪೇಂದ್ರ, ಲೂಸ್ ಮಾದ, ನೀನಾಸಂ ಸುಧೀರ್, ಅಕುಲ್ ಬಾಲಾಜಿ, ಚಂದು ಗೌಡ ಹೆಸಾರಂತಹಾ
ಕಲಾವಿದರು ಅಭಿನಯಿಸಿದ್ದಾರೆ ಎಂದರು.

ಪ್ಯಾನ್ ಇಂಡಿಯಾ ಸಿನಿಮಾ ರಚಿಸಿದರೆ ಹೊರೆಯಾಗಲಿದೆ. ಅದಕ್ಕೆ ತಕ್ಕಂತ ಜಾಹೀರಾತು ಹೊರೆಯಾಗಲಿದೆ. ಕಮರ್ಷಿಯಲ್ ಆದರೂ ಒಳ್ಳೆಯ ಮೆಸೇಜ್ ಇದೆ. ಗೌರಿ ತತ್ವದ ಮೇಲೆ ಸಿನಿಮಾ ಮಾಡುತ್ತಿಲ್ಲ. ಗೌರಿಯ ಕಥೆಯಲ್ಲ. ಆದರೆ ಅಕ್ಕನ ನೆನಪಿಗಾಗಿ ಸಿನಿಮಾ ಮಾಡುತ್ತಿರುವುದಾಗಿ ತಿಳಿಸಿದರು.

ನೈಜ ಘಟನೆಯ ಸಿನಿಮಾ ಇದಾಗಿದೆ. ಸಿನಿಮಾ ಕಥೆಯ ವಿಷಯದಲ್ಲಿ ಗೆದ್ದಿದ್ದೀನಿ ಸೋತಿದ್ದೀನಿ, ಆದರೆ ಗುಣಮಟ್ಟದಲ್ಲಿ ಸೋತಿಲ್ಲ. ನಮಗೆ ವಿದೇಶದ ಖರ್ಚು ರಾಜ್ಯದಲ್ಲಿ ಎರಡು ಶೂಟಿಂಗ್ ಮಾಡಬಹುದು. ಹಾಗಾಗಿ ವಿದೇಶದಲ್ಲಿ ಶೂಟಿಂಗ್ ಮಾಡಿಲ್ಲ. ಕಥೆಗೆ ವಿದೇಶಕ್ಕೆ ಹೋಗಿ ಶೂಟಿಂಗ್ ನ ಅವಶ್ಯಕತೆ ಇರಲಿಲ್ಲವೆಂದರು.

ನಾಯಕ ನಟನ ಮಾತು

ನಾನು ಶಿವಮೊಗ್ಗ ತಾಲೂಕಿನ ಕೊನಗವಳ್ಳಿಯ ಮೊಮ್ಮಗ ನನ್ನ ಸಿನಿಮಾ ಪ್ರಮೋಷನ್ ಗಾಗಿ ನಮ್ಮ ಹಳ್ಳಿಯ ಫ್ಯಾಮಿಲಿಯವರು ಇಲ್ಲಿಗೆ ಬಂದಿರುವುದು ಖಷಿಯಾಗಿದೆ ಎಂದು ಹೇಳುವ ಮೂಲಕ ತಮ್ಮ ಮಾತನ್ನು ಮುಂದುವರಿಸಿದರು,
ಚಿಕ್ಕ ವಯಸ್ಸಿನಿಂದ ಸಿನಿಮಾ ಇಂಡಸ್ಟ್ರೀಸ್ ಹೆಚ್ಚು ಪ್ರೀತಿ. ಸುದೀಪ್ ಮತ್ತು ನನ್ನ ತಂದೆಯ ಸಿನಿಮಾಗಳ ಪ್ರೇರಣೆ. ಯೋಗರಾಜ್ ಭಟ್ ರವರ ಗರಡಿ ಮತ್ತು ಕರಟಕಧಮನಕ ಸಿನಿಮಾದಲ್ಲಿ ಅಸಿಸ್ಟೆಂಟ್ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಅಸಿಸ್ಟೆಂಟ್ ನೃತ್ಯ ನಿರ್ದೇಶಕರಾಗಿದ್ದೇನೆ. ಪಲ್ಲವಿ ಮತ್ತು ಎಲ್ಲಿಂದಲೋ ಬಂದವರು ಸಿನಿಮಾವನ್ನ ಅತ್ತೆ ಜೊತೆ ನೋಡಿದ್ದ ನೆನಪನ್ನ ಮೆಲಕು ಹಾಕೊದ ನವ ನಾಯಕ ಅಪ್ಪು ಸಾರ್ ಮತ್ತು ಸುದೀಪ್ ನನಗೆ ಇನ್ಸಪರೇಷನ್ ಎಂದು ಹೇಳಿದರು.

ಸಾನಿಯಾ ಅಯ್ಯರ್ ಮಾತು

ನಟಿ ಸಾನಿಯಾ ಅಯ್ಯರ್ ಮಾತನಾಡಿ, ಸಿನಿಮಾದಲ್ಲಿ ಹೊಸಬರಿಗೆ ಅವಕಾಶ ನೀಡಿರುವುದು ಖುಷಿಯಾಗಿದೆ. ಸಮರ್ಜಿತ್ ಇಡೀ ತಂಡದಲ್ಲಿ ಕೆಲಸ ಮಾಡುವಾಗ ಕುಟುಂಬಸ್ಥಳು ಎಂಬಂತೆ ಟ್ರೀಟ್ ಸಿಕ್ಕಿದೆ. ಸಮರ್ಜಿತ್ ನೋಡಿದಾಗ ಅಪ್ಪು ಸಾರ್ ನೆನಪಾಗುತ್ತದೆ.

ಪಾತ್ರಕ್ಕಾಗಿ ಕಲಿಯಬೇಕಾದ ಅಂಶ ಸಿನಿಮಾದಲ್ಲಿದೆ. ಇಂದ್ರಜಿತ್ ಸಾರ್ ಇಲ್ಲವಾದರೆ ನನ್ನ ಕನಸು ಚಿಗುರು ಒಡೆಯುತ್ತಿರಲಿಲ್ಲ. ನಾನು ಧಾರವಾಹಿಯಿಂದ ಜರ್ನಿ ಆರಂಭಿಸಿದೆ ಸಿನಿಮಾದಲ್ಲಿ ತೆರೆದುಕೊಳ್ಳಲು ಅವಕಾಶ ಸಿಕ್ಕಿದೆ ಎಂದು ಬಣ್ಣಿಸಿದ ಅವರು ತಾವೇ ಬರೆದ ಕಾವ್ಯವನ್ನೂ ಹೇಳಿದ್ದು ಗಮನಾರ್ಹವಾಗಿತ್ತು.‌

ಕನ್ನಡ ಸಿನಿಮಾ ರಂಗ ಇನ್ನೂ ಬೆಳೆಯಬೇಕು

ತಾಂತ್ರಿಕವಾಗಿ ಮುಂದುವರೆದಿದೆ. ನಟ ನ ಟಿಯರು, ಛಾಯಾಗ್ರಹಕರು, ಕಥೆಗಳಲ್ಲಿ ವಿಫಲರಾಗಿದ್ದೇವೆ. ಕಥೆಯ ಗುಣಮಟ್ಟ ಹೆಚ್ಚಿಸಬೇಕಿದೆ. 70 ರ ದಶಕದಲ್ಲಿ ಡಾ. ರಾಜ್, ಲಂಕೇಶ್, ಪುಟ್ಟಣ್ಣ ಕಣಗಲ್ ಅವರು ಕನ್ಬಡ ಸಿನಿಮಾ ಇಂಡಸ್ಟ್ರೀಸ್ ನಲ್ಲಿ ಕ್ರಾಂತಿಮಾಡಿದ್ದಾರೆ. ಸಿನಿಮಾ ನಿರ್ದೇಶಕರ ಮಾಧ್ಯಮವಾದುದ್ದರಿಂದ ಅವರನ್ನ ಬೆಳೆಸಬೇಕಿದೆ.

ಸಾಹಿತಿಗಳು ಸಿನಿನಾದಿಂದ ದೂರವಾಗಿದ್ದಾರೆ. ಅವರಿಗೆ ಉತ್ತಮ ಸಂಭಾವನೆ ನೀಡಿದಾಗ ಬರುತ್ತಾರೆ. ಹಳ್ಳಿಗಳಿಂದ ಬಂದವರಿಗೆ ಪ್ರೋತ್ಸಹಿಸಬೇಕಿದೆ. ಸಿನಿಮಾ ರಂಗದಲ್ಲಿ ಥಿಯೇಟರ್ ಗಳು ಮುಚ್ಚುಹೋಗುತ್ತಿಚೆ. ಇದು ಬದಕಾವಣೆಯ ಕಾಲವಾಗಿದೆ. ಡಿಜಿಟಲ್ ಮೀಡಿಯಾವಾದುದರಿಂದ ಇದನ್ನ  ಎದಿರಿಸಲೇ ಬೇಕಾಗಿದೆ ಎಂದರು

ಮುಂದಿನ ತಿಂಗಳು ಸಿನಿಮಾ ಬಿಡುಗಡೆಯಾಗಲಿದೆ. ಅಕ್ಕ ಗೌರಿಯ ನೆನಪಿಗಾಗಿ ಸಿನಿಮಾಕ್ಕೆ ಅದೇ ಹೆಸರು ಇಡಕಾಗಿದೆ. ಗೌರಿಯ ನೆನಪಿಗಾಗಿ ಆರಂಭಿಸಲಾಗಿದೆ ವಿನಃ ಇದು ಗೌರಿ ಸಿದ್ದಾಂತದ ಸಿನಿಮಾ ಅಲ್ಲ. ಕನ್ನಡಕ್ಕೆ ಸೀಮಿತವಾಗಿದೆ. ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲು ಯುವಕರ ಮೇಲೆ ಒತ್ತಡ ಹಾಕಬಾರದು ಎಂಬ ಕಾರಣಕ್ಕೆ ಕನ್ನಡಕ್ಕೆ ಸೀಮಿತವಿಡಲಾಗಿದೆ ಎಂದರು.

Related Articles

Stay Connected

0FansLike
3,912FollowersFollow
0SubscribersSubscribe

Latest Articles