ವಂಚನೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಎಷ್ಟೇ ಮುತುವರ್ಜಿವಹಿಸಿದರೂ ಒಮ್ಮೊಮ್ಮೆ ಮೋಸ ಹೋಗಬೇಕಾಗುತ್ತದೆ. ಅದರಂತೆ ಇದೀಗ 22 ಬ್ಯಾಂಕ್ನಲ್ಲಿ ಹತ್ತು ಕೋಟಿ ಲೋನ್(loan) ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರು ಸೇರಿ ಒಟ್ಟು ಆರು ಜನರನ್ನು ಅರೆಸ್ಟ್ ಮಾಡಲಾಗಿದೆ.
ಬೆಂಗಳೂರು :
ಏ.19: ಕಟ್ಟಡವಿದೆ ಎಂದು ನಂಬಿಸಿ 22 ಬ್ಯಾಂಕ್ನಲ್ಲಿ ಹತ್ತು ಕೋಟಿ ಲೋನ್(loan) ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರು ಸೇರಿ ಒಟ್ಟು ಆರು ಜನರನ್ನು ಅರೆಸ್ಟ್ ಮಾಡಲಾಗಿದೆ. ನಾಗೇಶ್ ಭಾರದ್ವಾಜ್ ,ಬಿ ಎಸ್ ಸುಮಾ, ಸತೀಶ್, ವೇದಾ, ಆರ್ ವಿ ಶೇಷಗಿರಿ, ಆರ್ಎಸ್ ಶೋಭಾ ಬಂಧಿತ ಆರೋಪಿಗಳು. ಬೇಗೂರಿನಲ್ಲಿ ನಿವಾಸವಿದೆ ಎಂದು ನಂಬಿಸಿ ಅದರ ಮೇಲೆ ಲೋನ್ ಪಡೆಯಲಾಗಿತ್ತು, ಈ ಕುರಿತು ಜಯನಗರ ಪೊಲೀಸ್ ಠಾಣೆ(Jayanagar Police Station)ಯಲ್ಲಿ 2022 ರಲ್ಲಿ ಕೇಸ್ ಕೂಡ ದಾಖಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಆರೋಪಿಗಳು ನಾಪತ್ತೆಯಾಗಿದ್ದರು.