Water Crisis: ನೀರು ವ್ಯರ್ಥ ಮಾಡಿದವರಿಗೆ ಜಲಮಂಡಳಿ ಬಿಸಿ ಮುಟ್ಟಿಸಿದೆ. ಎಂಟು ವಲಯಗಳಿಂದ 20 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ. ಈ ಹಿಂದೆಯೇ ಅನ್ಯ ಬಳಕೆಗೆ ನೀರು ಬಳಸದಂತೆ ಸೂಚಿಸಲಾಗಿತ್ತು. ವಾಹನಗಳನ್ನು ತೊಳೆಯಲು ಹಾಗೂ ಗಿಡಗಳಿಗೆ ಕುಡಿಯುವ ನೀರು ಬಳಸದಂತೆ ಸೂಚನೆ ನೀಡಿತ್ತು. ಆದರೆ, ಈ ನಿಯಮವನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗಿದೆ. ತಲಾ 5 ಸಾವಿರದಂತೆ ಬರೋಬ್ಬರಿ 20.25 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ನೀರಿಗೆ ಹಾಹಾಕಾರ (Water Crisis) ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ನೀರಿನ ಪರದಾಟದಿಂದ ಜನರು ಹೈರಾಣಾಗಿದ್ದಾರೆ. ಈ ಸಮಸ್ಯೆಯ ತೀವ್ರತೆಯನ್ನು ಅರಿತ ವಿಸ್ತಾರ ನ್ಯೂಸ್ ಸಹ “ಜಲವೇ ಜೀವ”ನ ಅಭಿಯಾನದ ಮೂಲಕ ನೀರಿಲ್ಲದ ಕಡೆಗಳಲ್ಲಿ ಉಚಿತವಾಗಿ ನೀರು ಕೊಡುವ ಅಭಿಯಾನವನ್ನು ಮಾಡುತ್ತಿದೆ. ಈ ನಡುವೆ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ (Bangalore water problem) ಸಲುವಾಗಿ ಕೆಲ ದಿನಗಳ ಹಿಂದೆ ಜಲಮಂಡಳಿ ಆದೇಶವೊಂದನ್ನು ಹೊರಡಿಸಿತ್ತು. ವಾಹನ ತೊಳೆಯಲು ನೀರು ವ್ಯರ್ಥ ಮಾಡಿದರೆ ದಂಡ ವಿಧಿಸಲಾಗುವುದು ಎಂದು ಹೇಳಿತ್ತು. ಇದರನ್ವಯ ಈಗ ವಾಹನ ತೊಳೆದವರ ಮೇಲೆ ಇದುವರೆಗೆ ಬರೋಬ್ಬರಿ 20.25 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಈ ಮೂಲಕ ನೀರು ವ್ಯರ್ಥ ಮಾಡಿದವರಿಗೆ ಜಲಮಂಡಳಿ ಬಿಸಿ ಮುಟ್ಟಿಸಿದೆ. ಎಂಟು ವಲಯಗಳಿಂದ 20 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ. ಈ ಹಿಂದೆಯೇ ಅನ್ಯ ಬಳಕೆಗೆ ನೀರು ಬಳಸದಂತೆ ಸೂಚಿಸಲಾಗಿತ್ತು. ವಾಹನಗಳನ್ನು ತೊಳೆಯಲು ಹಾಗೂ ಗಿಡಗಳಿಗೆ ಕುಡಿಯುವ ನೀರು ಬಳಸದಂತೆ ಸೂಚನೆ ನೀಡಿತ್ತು. ಆದರೆ, ಈ ನಿಯಮವನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗಿದೆ. ತಲಾ 5 ಸಾವಿರದಂತೆ ಬರೋಬ್ಬರಿ 20 ಲಕ್ಷದ 25 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಯಾವ್ಯಾವ ವಲಯದಲ್ಲಿ ಎಷ್ಟು ದಂಡ ವಸೂಲಿ?