Wednesday, September 25, 2024
spot_img

ಮದ್ಯ ಸೇವನೆಗೆ ಹಣ ಕೊಟ್ಟಿಲ್ಲವೆಂದು ಮನೆಗೆ ಬೆಂಕಿಹಚ್ಚಿದ ಪತಿ

ನೆಲಮಂಗಲ :ಮದ್ಯ(Alcohol) ಸೇವನೆಗೆ ಹಣ ಕೊಟ್ಟಿಲ್ಲವೆಂದು ಪತಿಯೊಬ್ಬ ಪತ್ನಿ ಮೇಲೆ ಹಲ್ಲೆ ನಡೆಸಿದ್ದು, ಮನೆಗೆ ಬೆಂಕಿ ಹಚ್ಚಿದ ಘಟನೆ  ನೆಲಮಂಗಲದ ಕೊಟ್ಟನಹಳ್ಳಿಯಲ್ಲಿ ನಡೆದಿದೆ.ಮನೆಗೆ ಬೆಂಕಿ ಬಿಳುತ್ತಲೇ ಮನೆಯಿಂದ ಹೆಂಡತಿ ಹಾಗೂ ಮಕ್ಕಳು ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ.

ಈ ಘಟನೆಯಲ್ಲಿ ಪತ್ನಿ ಆಶಾಗೆ ಗಾಯವಾಗಿದ್ದು, ಸೋಲದೇವನಹಳ್ಳಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

 

ಬೆಂಕಿಯಿಂದ ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳು, ಮಕ್ಕಳ ಶಾಲಾ ಪುಸ್ತಕಗಳು, ಟಿವಿ, ಬಟ್ಟೆ ಸುಟ್ಟು ಭಸ್ಮವಾಗಿವೆ. ಈ ಸಂಬಂಧ ಪತ್ನಿ ಆಶಾ ದೂರು ನೀಡಿದ್ದು, ಆಕೆಯ ಗಂಡ ಕಿರಣ್‌ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ನೆಲಮಂಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Stay Connected

0FansLike
3,912FollowersFollow
0SubscribersSubscribe

Latest Articles