Wednesday, September 25, 2024
spot_img

ಲೋಕಸಭಾ ಚುನಾವಣೆ; ಕರ್ನಾಟಕದ ಹಲವು ಕ್ಷೇತ್ರಗಳ ಬಿಜೆಪಿ ಟಿಕೆಟ್​​ ಫೈನಲ್​​ ಯಾರಿಗೆ..?

ಲೋಕಸಭಾ ಚುನಾವಣೆ; ಕರ್ನಾಟಕದ ಹಲವು ಕ್ಷೇತ್ರಗಳ ಬಿಜೆಪಿ ಟಿಕೆಟ್​​ ಫೈನಲ್​​; ಯಾರಿಗೆ..?

ಬಿಜೆಪಿ ನಾಯಕರ ಜೊತೆ ಹೈಕಮಾಂಡ್ ಸಭೆ ಅಂತ್ಯ

ರಾಜ್ಯದ 22 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಫೈನಲ್..!

ಪ್ರತಾಪ್​ ಸಿಂಹಗೆ ಮೈಸೂರು ಟಿಕೆಟ್​ ಅನುಮಾನ

ಬೆಂಗಳೂರು: 2024ರ ಲೋಕಸಭಾ ಚುನಾವಣೆ ಸಂಬಂಧ ನಡೆಯುತ್ತಿದ್ದ ಬಿಜೆಪಿ ಮೀಟಿಂಗ್​ ಅಂತ್ಯವಾಗಿದೆ. ಹೈಕಮಾಂಡ್​​ ಜತೆ ರಾಜ್ಯ ಬಿಜೆಪಿ ನಾಯಕರು ನಡೆಸಿದ ಸಭೆಯಲ್ಲಿ ಕರ್ನಾಟಕದ 22 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್​ ಫೈನಲ್​ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಸಂಸದ ಪ್ರತಾಪ್​ ಸಿಂಹಗೆ ಮೈಸೂರು ಟಿಕೆಟ್​ ಸಿಗೋದು ಅನುಮಾನವಾಗಿದೆ. ಹೀಗಾಗಿ ಸಿಂಹ ಬದಲಿಗೆ ಮೈಸೂರಿನಿಂದ ಯದುವೀರ್ ಒಡೆಯರ್​ಗೆ ಟಿಕೆಟ್ ನೀಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರಕ್ಕೆ ಡಾ. ಮಂಜುನಾಥ್, ತುಮಕೂರಿನಿಂದ ವಿ.ಸೋಮಣ್ಣಗೆ ಟಿಕೆಟ್ ಸಿಗೋ ಸಾಧ್ಯತೆ ಇದೆ. ಹಾವೇರಿಯಿಂದ ಬಸವರಾಜ ಬೊಮ್ಮಾಯಿ ಸ್ಪರ್ಧೆ ಮಾಡಲಿದ್ದು, ಚಿಕ್ಕಬಳ್ಳಾಪುರದ ಟಿಕೆಟ್ ಡಾ.ಕೆ.ಸುಧಾಕರ್​ಗೆ ಸಿಗಲಿದೆ. ದಕ್ಷಿಣ ಕನ್ನಡ ಟಿಕೆಟ್​​ ನಳಿನ್ ಕುಮಾರ್ ಕಟೀಲ್​​​ಗೆ ಟಿಕೆಟ್​ ಬಹುತೇಕ ಡೌಟ್​ ಆಗಿದೆ.

ಫೈನಲ್​ ಮಾಡಲಾದ ಬಿಜೆಪಿ ಟಿಕೆಟ್​ ಲಿಸ್ಟ್​ ಹೀಗಿದೆ..!

ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ್
ಶಿವಮೊಗ್ಗ – ಬಿ.ವೈ.ರಾಘವೇಂದ್ರ
ಹಾವೇರಿ – ಬಸವರಾಜ ಬೊಮ್ಮಾಯಿ
ತುಮಕೂರು- ವಿ.ಸೋಮಣ್ಣ
ಮೈಸೂರು – ಯದುವೀರ್​ ಒಡೆಯರ್
ಬೆಳಗಾವಿ- ಜಗದೀಶ್​ ಶೆಟ್ಟರ್​
ಚಿಕ್ಕೋಡಿ – ರಮೇಶ್​ ಕತ್ತಿ
ಬೆಂಗಳೂರು ಗ್ರಾಮಾಂತರ- ಡಾ.ಸಿ.ಎನ್​.ಮಂಜುನಾಥ್​
ಚಿತ್ರದುರ್ಗ- ನಾರಾಯಣಸ್ವಾಮಿ
ಬೆಂಗಳೂರು ಸೆಂಟ್ರಲ್- ಪಿ.ಸಿ ಮೋಹನ್
ಬೆಂಗಳೂರು ದಕ್ಷಿಣ- ತೇಜಸ್ವಿ ಸೂರ್ಯ
ಬೆಳಗಾವಿ- ಜಗದೀಶ್ ಶೆಟ್ಟರ್
ಚಿಕ್ಕೋಡಿ- ರಮೇಶ್ ಕತ್ತಿ
ಕಲ್ಬುರ್ಗಿ- ಉಮೇಶ್ ಜಾದವ್
ಬಿಜಾಪುರ- ಗೋವಿಂದ ಕಾರಜೋಳ

Related Articles

Stay Connected

0FansLike
3,912FollowersFollow
0SubscribersSubscribe

Latest Articles