ಲೋಕಸಭಾ ಚುನಾವಣೆ; ಕರ್ನಾಟಕದ ಹಲವು ಕ್ಷೇತ್ರಗಳ ಬಿಜೆಪಿ ಟಿಕೆಟ್ ಫೈನಲ್; ಯಾರಿಗೆ..?
ಬಿಜೆಪಿ ನಾಯಕರ ಜೊತೆ ಹೈಕಮಾಂಡ್ ಸಭೆ ಅಂತ್ಯ
ರಾಜ್ಯದ 22 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಫೈನಲ್..!
ಪ್ರತಾಪ್ ಸಿಂಹಗೆ ಮೈಸೂರು ಟಿಕೆಟ್ ಅನುಮಾನ
ಬೆಂಗಳೂರು: 2024ರ ಲೋಕಸಭಾ ಚುನಾವಣೆ ಸಂಬಂಧ ನಡೆಯುತ್ತಿದ್ದ ಬಿಜೆಪಿ ಮೀಟಿಂಗ್ ಅಂತ್ಯವಾಗಿದೆ. ಹೈಕಮಾಂಡ್ ಜತೆ ರಾಜ್ಯ ಬಿಜೆಪಿ ನಾಯಕರು ನಡೆಸಿದ ಸಭೆಯಲ್ಲಿ ಕರ್ನಾಟಕದ 22 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸಂಸದ ಪ್ರತಾಪ್ ಸಿಂಹಗೆ ಮೈಸೂರು ಟಿಕೆಟ್ ಸಿಗೋದು ಅನುಮಾನವಾಗಿದೆ. ಹೀಗಾಗಿ ಸಿಂಹ ಬದಲಿಗೆ ಮೈಸೂರಿನಿಂದ ಯದುವೀರ್ ಒಡೆಯರ್ಗೆ ಟಿಕೆಟ್ ನೀಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರಕ್ಕೆ ಡಾ. ಮಂಜುನಾಥ್, ತುಮಕೂರಿನಿಂದ ವಿ.ಸೋಮಣ್ಣಗೆ ಟಿಕೆಟ್ ಸಿಗೋ ಸಾಧ್ಯತೆ ಇದೆ. ಹಾವೇರಿಯಿಂದ ಬಸವರಾಜ ಬೊಮ್ಮಾಯಿ ಸ್ಪರ್ಧೆ ಮಾಡಲಿದ್ದು, ಚಿಕ್ಕಬಳ್ಳಾಪುರದ ಟಿಕೆಟ್ ಡಾ.ಕೆ.ಸುಧಾಕರ್ಗೆ ಸಿಗಲಿದೆ. ದಕ್ಷಿಣ ಕನ್ನಡ ಟಿಕೆಟ್ ನಳಿನ್ ಕುಮಾರ್ ಕಟೀಲ್ಗೆ ಟಿಕೆಟ್ ಬಹುತೇಕ ಡೌಟ್ ಆಗಿದೆ.
ಫೈನಲ್ ಮಾಡಲಾದ ಬಿಜೆಪಿ ಟಿಕೆಟ್ ಲಿಸ್ಟ್ ಹೀಗಿದೆ..!
ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ್
ಶಿವಮೊಗ್ಗ – ಬಿ.ವೈ.ರಾಘವೇಂದ್ರ
ಹಾವೇರಿ – ಬಸವರಾಜ ಬೊಮ್ಮಾಯಿ
ತುಮಕೂರು- ವಿ.ಸೋಮಣ್ಣ
ಮೈಸೂರು – ಯದುವೀರ್ ಒಡೆಯರ್
ಬೆಳಗಾವಿ- ಜಗದೀಶ್ ಶೆಟ್ಟರ್
ಚಿಕ್ಕೋಡಿ – ರಮೇಶ್ ಕತ್ತಿ
ಬೆಂಗಳೂರು ಗ್ರಾಮಾಂತರ- ಡಾ.ಸಿ.ಎನ್.ಮಂಜುನಾಥ್
ಚಿತ್ರದುರ್ಗ- ನಾರಾಯಣಸ್ವಾಮಿ
ಬೆಂಗಳೂರು ಸೆಂಟ್ರಲ್- ಪಿ.ಸಿ ಮೋಹನ್
ಬೆಂಗಳೂರು ದಕ್ಷಿಣ- ತೇಜಸ್ವಿ ಸೂರ್ಯ
ಬೆಳಗಾವಿ- ಜಗದೀಶ್ ಶೆಟ್ಟರ್
ಚಿಕ್ಕೋಡಿ- ರಮೇಶ್ ಕತ್ತಿ
ಕಲ್ಬುರ್ಗಿ- ಉಮೇಶ್ ಜಾದವ್
ಬಿಜಾಪುರ- ಗೋವಿಂದ ಕಾರಜೋಳ